ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ಅಗತ್ಯ - ಡಾ. ಎಂ.ಎ. ಶಂಕರ್

ಸಕಲೇಶಪುರ: ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ಅಗತ್ಯ - ಡಾ. ಎಂ.ಎ. ಶಂಕರ್

Fri, 04 Dec 2009 16:47:00  Office Staff   S.O. News Service
ಸಕಲೇಶಪುರ:- ರೈತರು ಮಣ್ಣಿನಲ್ಲಿ ಮಳೆನೀರು ಹಿಂಗಿಸಲು ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಮೆಡೆನೂರು ಕೃಷಿ ವಿಶ್ವ ವಿದ್ಯಾನಿಲಯದ ನಿರ್ದೆಶಕ ಡಾ. ಎಂ.ಎ ಶಂಕರ್ ಹೇಳಿದ್ದಾರೆ. 
 
ಅವರು ಶುಕ್ರವಾರ ತಾಲ್ಲೂಕಿನ ಹಾನುಬಾಳ್ಳು ಗ್ರಾಮದಲ್ಲಿ ಕೃಷಿ ಮಾಹಿತಿ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ಒಂದು ಸೆಂ.ಮೀ. ಮಳೆಯಾದರೆ, ಒಂದು ಲಕ್ಷ ಲೀಟರ್ ನೀರು ಸಂಗ್ರಹಣೆಯಾಗುತ್ತದೆ. ಇದನ್ನು ರೈತರು ತಿಳಿದರೆ ನೀರಿನ ಕೊರತೆ ಎಂದು ಉಂಟಾಗುವುದಿಲ್ಲ ಎಂದರು. ಸಾವಯವ ಗೊಬ್ಬರದ ಕೃಷಿ ಇಂದು ಅತ್ಯವಶ್ಯಕ ರಾಸಯಾನಿಕ ಗೊಬ್ಬರದಿಂದಾಗಿ ಮಣ್ಣು ತನ್ನ ಸತ್ವ ಕಳೆದುಕೊಳ್ಳುತಿದ್ದು ರೈತರು ಈ ನಿಟ್ಟಿನಲ್ಲಿ ಪ್ರಯತ್ನಿಸ ಬೇಕು ಎಂದರು. 
 4-skl2.jpg
ಶಾಸಕ ಹೆಚ್.ಕೆ ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಆಧುನಿಕ ತಂತ್ರಜ್ಝಾನ ಆಳವಡಿಸಿ ಕೊಳ್ಳುವುದರಿಂದ ಬೇಸಾಯದ ಖರ್ಚನ್ನು ಕಡಿಮೆ ಮಾಡಬಹುದು ಇದರಿಂದಾಗಿ ರೈತರ ಆರ್ಥಿಕ ಪರಿಸ್ಥತಿ ಉತ್ತಮ ಗೊಳ್ಳುತ್ತದೆ ಎಂದರು.
 
ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮಾತನಾಡಿ, ವಿವಿಧ ಬೆಳೆ ಮತ್ತು ಬೀಜಗಳನ್ನು ಸಂಗ್ರಹಿಸಿಡುವಂತೆ ಕೃಷಿಯಲ್ಲಿ ಆದಾಯ ತರುವ ಉಪ ಕಸುಬುಗಳನ್ನು ಅಳವಡಿಸಿ ಕೊಂಡರೆ ರೈತರು ತಮ್ಮ ಆರ್ಥಿಕ ಪರಿಸ್ಥತಿಯನ್ನು ಸದೃಡಗೊಳಿಸಿ ಕೊಳ್ಳಬಹುದು ಎಂದರು.
 
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಮತ್ತು ವಿವಿಧ ಕೃಷಿಗೆ ಸಂಭದಿಸಿದ ಇಲಾಖೆಗಳು ವಸ್ತು ಪ್ರದರ್ಶನ ಏರ್ಪಡಿಸಿದ್ದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಕುಮಾರಸ್ವಾಮಿ. ತಾ.ಪಂ ಸದಸ್ಯರಾದ ರಂಗನಾಥ. ಮಂಜುಳ. ಗ್ರಾ.ಪಂ ಅಧ್ಯಕ್ಷೆ ಗೀತಾ. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯೋಗೇಶ್. ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕ ಸಂತೋಷ್, ಸಂಬಾರ ಮಂಡಳಿ ವಿಜ್ಜಾನಿ ಈಶ್ವರ್‌ನೂಲ್ವಿ ಮುಂತಾದವರು ಉಪಸ್ಥತಿರಿದ್ದರು 


Share: